ಋಷಿಪಂಚಮಿ ವ್ರತ
ಋಷಿಪಂಚಮಿ ವ್ರತವನ್ನು ಭಾಧ್ರಪದ ಮಾಸ ಶುಕ್ಲಪಕ್ಷದ ಐದನೆದಿನ
ಅಂದರೆ ವಿನಾಯಕ ಚತುರ್ಥಿಯ ಮರುದಿನ ಆಚರಿಸಲಾಗುತ್ತದೆ.

ಸಾಂಪ್ರದಾಯಿಕವಾಗಿ ಸಪ್ತಋಷಿಗಳಾದ
ಕಾಶ್ಯಪ,ಅತ್ರಿ,ಭಾರದ್ವಾಜ,ವಿಶ್ವಾಮಿತ್ರ,ಗೌತಮ,
ಜಮದಗ್ನಿ ಮತ್ತು
ವಶಿಷ್ಟ ಋಷಿಗಳು ಮಾನವ ಕುಲದ ಒಳಿತಿಗಾಗಿ ಶ್ರಮಿಸಿದ್ದನ್ನು ನೆನೆಸಿ
ಕೊಳ್ಳುವುದಕ್ಕಾಗಿ ಮಾಡುವ ಪೂಜೆ. ಈ ವ್ರತವನ್ನು ಕೇರಳದಲ್ಲಿ
ವಿಶ್ವಕರ್ಮ ಪೂಜೆಯೆಂದು ಕರೆಯುತ್ತಾರೆ.

ಈ ದಿನ ಹೆಂಗಸರು ಉಪವಾಸ ಮಾಡುತ್ತಾರೆ.
ಈ ವ್ರತವನ್ನು ಮಾಡುವುದರಿಂದ ಇಹಪರಗಳಲ್ಲಿ ಮಾಡಿದ ಪಾಪಗಳು
ನಾಶವಾಗುತ್ತವೆ.

ಋಷಿಪಂಚಮಿ ವ್ರತದ ಬಗ್ಗೆ ಬ್ರಹ್ಮನು ಒಂದು
ಸಂಗತಿಯನ್ನು ಹೇಳುತ್ತಾನೆ.

ಹಿಂದೆ ಉತಾಂಕ್ ಎಂಬ ಬ್ರಾಹ್ಮಣನು
ಸುಶೀಲಎಂಬ ಹೆಂಡತಿಯೊಂದಿಗೆ ವಾಸ ಮಾಡುತ್ತಿದ್ದನು. ಅವರ
ಜೊತೆಯಲ್ಲಿ ಅವರ ವಿದವೆ ಮಗಳು ವಾಸವಾಗಿದ್ದಳು. ಒಂದು ರಾತ್ರಿ
ಅವಳ ದೇಹವನ್ನು ಇರುವೆಗಳು ಮುತ್ತಿಕೊಂಡಿರುವುದನ್ನು ನೋಡಿ
ಭಯದಿಂದ ಒಬ್ಬ ಋಷಿಯನ್ನು ಪರಿಹಾರವೇನೆಂದು ಕೇಳಿದರು.


ಋಷಿಗಳು ನಿಮ್ಮ ಮಗಳು ಪೂರ್ವಜನ್ಮದಲ್ಲಿ ಮಾಡಿದ ಪಾಪದ
ಫಲವೇ ಇದಕ್ಕೆ ಕಾರಣವೆಂದು ಹೇಳುತ್ತಾರೆ. ನಿಮ್ಮ ಮಗಳು ರಜಸ್ವಲೆ ಯಾದಾಗ ಅಡುಗೆ ಮನೆಗೆ ಪ್ರವೇಶಮಾಡಿ ಪಾಪಮಾಡಿದ್ದಾಳೆ. ಅದರ
ಪರಿಣಾಮ ಇದು ಎಂದು ಹೇಳುತ್ತಾರೆ.

ಋಷಿಗಳು ಅವಳಿಗೆ ಈ ಪಾಪ
ಪರಿಹಾರಕ್ಕೆ ಋಷಿಪಂಚಮಿ ವ್ರತವನ್ನು ಮಾಡು ಎಂದು ಉಪದೇಶ
ಮಾಡುತ್ತಾರೆ.

ಅದರಂತೆ ಅವಳು ಋಷಿಪಂಚಮಿ ವ್ರತವನ್ನು ಮಾಡಿ
ಪಾಪ ಮುಕ್ತಳಾಗುತ್ತಾಳೆ.

ಋಷಿಪಂಚಮಿ ವ್ರತಾಚರಣೆ :
ಋಷಿಪಂಚಮಿಯದಿನ ಬೆಳಗ್ಗೆ ಬೇಗನೆ ಎದ್ದು ತಮ್ಮ ನಿತ್ಯಕರ್ಮಗಳನ್ನು
ಮುಗಿಸಿ ಎಣ್ಣೆ ಸ್ನಾನವನ್ನು ಮಾಡಬೇಕು. ನಂತರ ಪಂಚಗವ್ಯವನ್ನು
ತೆಗೆದು ಕೊಳ್ಳಬೇಕು.

ಸಪ್ತಋಷಿಗಳನ್ನು ಪೂಜೆಮಾಡಿ ಬ್ರಾಹ್ಮಣರಿಗೆ
ಭೋಜನ ಹಾಕ ಬೇಕು.

ಋಷಿಪಂಚಮಿ ಕುರಿತು ಇನ್ನೊಂದು ಪ್ರಸಂಗವಿದೆ.

ಒಮ್ಮೆ ಜಯಶ್ರೀ
ಎಂಬ ಹೆಂಗಸು ರಜಸ್ವಲಾ ಕಾಲದಲ್ಲಿ ಅನ್ವಯವಾಗುವ ನಿಷಿದ್ದಗಳನ್ನು
ಮೀರಿ ಅಂದರೆ ತಿನ್ನ ಬಾರದ್ದನ್ನು ತಿನ್ನುವುದು, ಹೋಗಬಾರದ ಕಡೆಗೆ
ಹೋಗುವುದು, ಎಲ್ಲರನ್ನು ಮುಟ್ಟುವುದು ಮಾಡಿ ಪಾಪ ಮಾಡುತ್ತಾಳೆ.

ಇವಳು ಮಾಡಿದ ಪಾಪದ ಫಲ ಇವಳ ಗಂಡನ ಮೇಲು
ಪರಿಣಾಮವಾಗಿ ಅವರು ಸತ್ತನಂತರ ಅವರ ಮಗ ಸುಮತಿ
ಮನೆಯಲ್ಲೇ ಹೆಣ್ಣುನಾಯಿಯಾಗಿ,ಎತ್ತಾಗಿ ಹುಟ್ಟುತ್ತಾರೆ.

ಒಂದು ದಿನ ಸುಮತಿಯು ಶ್ರಾದ್ದದ ಸಲುವಾಗಿ ಪಿತೃಗಳಿಗೆ ಅರ್ಪಿಸಲು
ಕೀರನ್ನು ಮಾಡಿಸಿರುತ್ತಾನೆ. ಆಗ ಒಂದು ಹಾವು ಬಂದು ಅದನ್ನು
ವಿಷಪೂರಿತ ವಾಗಿಸುತ್ತದೆ.

ಆದರೆ ಇದನ್ನು ನೋಡಿದ ನಾಯಿಯು
ನಾನು ಇದನ್ನು ಕೆಡಿಸಿದರೆ ಯಾರು ಇದನ್ನು ಉಪಯೋಗಿಸುವುದಿಲ್ಲ
ಆಗ ಯಾರಿಗೂ ಏನೂ
ತೊಂದರೆ ಯಾಗುವುದಿಲ್ಲವೆಂದು ಯೋಚಸಿ
ಅದನ್ನು ಕೆಡಿಸುತ್ತದೆ. ಇದನ್ನು ತಿಳಿದ ಸುಮತಿಯು ಯಾರಿಗೂ ಕೀರನ್ನು
ಹಾಕುವುದಿಲ್ಲ.

ಇದರಿಂದ ಆಗಬಹುದಾದ ಅನಾಹುತವುವು ತಪ್ಪುತ್ತದೆ.
ಆದರೆ ಸುಮತಿಯು ನಾಯಿಯ ಮೇಲೆ ಕೋಪಗೊಂಡು ಅದಕ್ಕೆ
ಚೆನ್ನಾಗಿ ಹೊಡೆಯುತ್ತಾನೆ.

ಇದನ್ನು ರಾತ್ರಿ ತನ್ನ ಗಂಡನಿಗೆ ಹೇಳಿ,
ಬ್ರಾಹ್ಮಣರಿಗೆ ಸರಿಯಾದ ಊಟ ಹಾಕದೇ ಶ್ರಾದ್ದದ ಫಲ
ಬರಲಿಲ್ಲವೆಂದು ದುಃಖ ಪಡುತ್ತಾರೆ. ಇದನ್ನು ತಿಳಿದ ಸುಮತಿಯು
ಮರುದಿನ ಪೂರ್ಣ ಭೋಜನ ಮಾಡಿಸುತ್ತಾನೆ.

ಮರದಿನ ಋಷಿಪಂಚಮಿದಿನ. ಇಬ್ಬರು ಋಷಿಗಳನ್ನು ಕಂಡು ಅವರನ್ನು
ಈ ಜನ್ಮಗಳಿಗೆ ಕಾರಣವನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತಾರೆ.

ಆಗ ಋಷಿಗಳು ನೀವು ಮಾಡಿದ ಪಾಪದ ಫಲದಿಂದ ಈ ಜನ್ಮ
ಪಡದಿರುವರೆಂದು ಹೇಳುತ್ತಾರೆ.
ನೀವು ಋಷಿಪಂಚಮಿ ವ್ರತ ಮಾಡಿ ಈ ಜನ್ಮದಿಂದ ಮುಕ್ತ ರಾಗಿ ಎಂದು
ಹೇಳುತ್ತಾರೆ.

ಋಷಿಪಂಚಮಿ ಆಚರಣೆಯಿಂದ ಸಕಲ ಪಾಪಗಳೂ ನಿವಾರಣೆಯಾಗಿ
ದೀರ್ಘಾಯುಸ್ಸು,ಐಶ್ವರ್ಯ ಮುಂತಾದವು ಲಬಿಸುತ್ತದೆ.
‌ ‌ ಋಷಿ ಪಂಚಮೀ ‌ ‌ ‌ಋಷಿ ಪಂಚಮಿಯನ್ನು ಹಿಂದೂ ಧರ್ಮದಲ್ಲಿ ಮಂಗಳಕರ ಹಬ್ಬವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಭಾರತದ ಎಲ್ಲಾ ಋಷಿಗಳನ್ನು ಗೌರವಿಸಲು ಸಮರ್ಪಿಸಲಾಗಿದೆ. ಋಷಿ ಪಂಚಮಿಯು ಪ್ರಾಥಮಿಕವಾಗಿ ಸಪ್ತಋಷಿ ಎಂದು ಕರೆಯಲ್ಪಡುವ ಏಳು ಮಹಾನ್ ಋಷಿಗಳಿಗೆ ಸಮರ್ಪಿತವಾಗಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಋಷಿ ಪಂಚಮಿಯನ್ನು ಆಚರಿಸಲಾಗುತ್ತದೆ.

ಋಷಿ ಪಂಚಮಿ ಮಹತ್ವ

ಧರ್ಮಗ್ರಂಥಗಳ ಪ್ರಕಾರ, ಉತ್ತಂಕ ಎಂಬ ಬ್ರಾಹ್ಮಣನು ತನ್ನ ಹೆಂಡತಿ ಸುಶೀಲಳೊಂದಿಗೆ ವಾಸಿಸುತ್ತಿದ್ದನು. ಅವರ ಮಗಳು ವಿಧವೆಯಾಗಿದ್ದಳು ಮತ್ತು ಅವರೊಂದಿಗೆ ವಾಸಿಸುತ್ತಿದ್ದರು. ಒಂದು ರಾತ್ರಿ, ಮಗಳ ದೇಹವು ಹಲವಾರು ಇರುವೆಗಳಿಂದ ಮುಚ್ಚಲ್ಪಟ್ಟಿದೆ, ಇದು ತಾಯಿ ಮತ್ತು ತಂದೆಯನ್ನು ಚಿಂತೆ ಮಾಡಿತು. ಆದ್ದರಿಂದ, ಅವರು ಈ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡುವ ಋಷಿಯನ್ನು ಕರೆದರು. ಚಿಂತೆಗೀಡಾದ ತಂದೆ ತನ್ನ ಮಗಳ ಆರಂಭಿಕ ವಿಧವೆಯ ಹಿಂದಿನ ಕಾರಣ ಮತ್ತು ಅವಳ ದುಃಖದ ಕಾರಣವನ್ನು ಋಷಿಯನ್ನು ಕೇಳಿದರು. ತನ್ನ ಹಿಂದಿನ ಜನ್ಮದ ಕರ್ಮಗಳಿಂದಾಗಿ ಅವಳು ಈ ಕೆಟ್ಟ ಪರಿಸ್ಥಿತಿಯಿಂದ ಬಳಲುತ್ತಿದ್ದಾಳೆ ಎಂದು ಋಷಿ ಹೇಳಿದರು. ಹಿಂದಿನ ಜನ್ಮದಲ್ಲಿ ಅವಳು ತನ್ನ ಮಾಸಿಕ ಚಕ್ರದಲ್ಲಿ ಪೂಜಾ ಗೃಹ ಪ್ರವೇಶಿಸಿದಳು ಎಂದು ಋಷಿ ಅವರಿಗೆ ಹೇಳಿದರು. ಪರಿಹಾರವನ್ನು ಕೇಳಿದ ನಂತರ, ಋಷಿ ಮಗಳು ತನ್ನ ಆತ್ಮ ಮತ್ತು ದೇಹವನ್ನು ಶುದ್ಧೀಕರಿಸಲು ಋಷಿ ಪಂಚಮಿಯಂದು ಉಪವಾಸವನ್ನು ಆಚರಿಸಲು ಸೂಚಿಸಿದರು, ಇದರಿಂದ ಅವಳು ತನ್ನ ಎಲ್ಲಾ ಮತ್ತು ಹಿಂದಿನ ಪಾಪಗಳಿಂದ ಮುಕ್ತಿ ಹೊಂದಬಹುದು.

ಋಷಿ ತನಗೆ ಸೂಚಿಸಿದ್ದನ್ನು ಅವಳು ನಿಖರವಾಗಿ ಮಾಡಿದಳು ಮತ್ತು ಅವಳು ಪೂರ್ಣ ಭಕ್ತಿ ಮತ್ತು ಸಮರ್ಪಣೆಯೊಂದಿಗೆ ಋಷಿ ಪಂಚಮಿಯಂದು ಉಪವಾಸವನ್ನು ಆಚರಿಸಿದಳು ಮತ್ತು ಇದು ಎಲ್ಲಾ ರೀತಿಯ ಪಾಪಗಳು ಮತ್ತು ಹಿಂದಿನ ದೋಷಗಳಿಂದ ತನ್ನ ಆತ್ಮ ಮತ್ತು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡಿತು.

ಋಷಿ ಪಂಚಮಿ ಆಚರಣೆಗಳು
ಭಕ್ತರು ಮುಂಜಾನೆಯೇ ಎದ್ದು, ಎದ್ದ ನಂತರವೇ ಪುಣ್ಯಸ್ನಾನ ಮಾಡುತ್ತಾರೆ. ಈ ದಿನ ಕಟ್ಟುನಿಟ್ಟಾದ ಋಷಿ ಪಂಚಮಿ ಉಪವಾಸವನ್ನು ಆಚರಿಸಿ. ಭಕ್ತರು ಏಳು ಮಹಾನ್ ಋಷಿಗಳ ಸಪ್ತೃಷಿಯನ್ನು ಪೂಜಿಸುತ್ತಾರೆ, ಇದು ಎಲ್ಲಾ ಆಚರಣೆಗಳ ಅಂತಿಮ ಅಂಶವಾಗಿದೆ. ಎಲ್ಲಾ ಏಳು ಋಷಿಗಳ ಉಪಸ್ಥಿತಿಯನ್ನು ಆಹ್ವಾನಿಸಲು, ಪ್ರಾರ್ಥನೆಗಳು ಮತ್ತು ಹೂವುಗಳು ಮತ್ತು ಆಹಾರ ಉತ್ಪನ್ನಗಳಂತಹ ಹಲವಾರು ಪವಿತ್ರ ವಸ್ತುಗಳನ್ನು ನೀಡಲಾಗುತ್ತದೆ ಮತ್ತು ಅವರನ್ನು ನೆನಪಿಸಿಕೊಳ್ಳುವ ಮೂಲಕ ಮತ್ತು ಶ್ಲೋಕಗಳನ್ನು ಪಠಿಸುವ ಮೂಲಕ ಹವನವನ್ನು ಮಾಡಿ. ಅವರು ತಮ್ಮ ಹಿಂದಿನ ಜನ್ಮದಲ್ಲಿ ಮಾಡಬಹುದಾದ ಪಾಪಗಳಿಗೆ ಋಷಿಗಳಿಂದ ಕ್ಷಮೆಯನ್ನು ಕೋರಿ ತಮ್ಮ ದಿನವನ್ನು ಕಳೆಯುತ್ತಾರೆ. ‌ ‌ ‌ ಋಷಿ ಪಂಚಮಿ ಪೂಜೆಯ ಮುಹೂರ್ತ : 11-05 am ರಿಂದ 01-36 pm…‌ ‌ ‌ ‌ ‌ ‌ ‌ ‌ ‌ ಋಷಿ ಪಂಚಮಿ ಪೂಜಾ ವಿಧಾನ

ಭಾದ್ರಪದ ಶುಕ್ಲ ಪಂಚಮಿ ಋಷಿಪಂಚಮಿ ವ್ರತವು. ಅಂದು ವ್ರತಮಾಡುವ ಸ್ತ್ರೀಯು ಪ್ರಾತಕಾಲದಲ್ಲಿ ಸ್ನಾನ ನಿತ್ಯ ಕ್ರಿಯಾಗಳನ್ನೆಲ್ಲಾ ನೆರವೇರಿಸಿ ನದಿ ಮೊದಲಾದ ಜಲಕ್ಕೆ ೧೦೮ ಉತ್ತರಾಣಿ ಕಡ್ಡಿಗಳು, ಭಸ್ಮ, ಗೋಮಯ, ಮೃತ್ತಿಕೆ, ಎಳ್ಳು, ನೆಲ್ಲಿಯಕಾಯಿ ಗಳನ್ನು ತೆಗೆದುಕೂಂಡು ಹೋಗಬೆಕು. ಅಲ್ಲಿ ಆದ್ಯಪೂರ್ವೋಚರಿತ ಏವಂ ಗುಣವಿಶೇಷಣ ವಿಶಿಷ್ಟಾಯಂ ಮಮ ಇಹಜನ್ಮನೀ ಜನ್ಮಾಂತರ ಜ್ಞಾತಾಜ್ಞಾತ ಸ್ಪರ್ಶಜನಿತ ದೋಷಕ್ಷಯದ್ವಾರಾ ಅರುಂಧತಿ ಸಹಿತ ಕಶ್ಯಪಾದಿಸಪ್ತರ್ಷಿ ಪ್ರೀತ್ಯರ್ಥಂ ಋಷಿಪಂಚಮಿ ವ್ರತಾಂಗತ್ವೇನ ದಂತಧಾವನ ಭಸ್ಮ, ಮೃತಿಕಾ, ಗೋಮಯ, ತಿಲಾಮುಲಕ, ಕಲ್ಕ ಲೇಪನ ಪೂರ್ವಕ ಸಂಗಮಾದಿ ತೀರ್ಥಸ್ನಾನಮಹಂ ಕರಿಷ್ಯೇ ಎಂದು ಸಂಕಲ್ಪ ಪೂರ್ವಕ ಸ್ನಾನ ಮಾಡಬೇಕು.

ವನಸ್ಪತಿ ಪ್ರಾರ್ಥನೆ
ಆಯುರ್ಬಲಂ ಯಶೋವರ್ಚ: ಪ್ರಜಾ: ಪಶುವಸೂನಿ ಚ:| ಬ್ರಹ್ಮಪ್ರಜ್ಞಾ ಚ ಮೇಧಾಂ ಚತ್ವನ್ನೂ ದೇಹವನಸ್ಪತೆ|| (ವನಸ್ಪತಿಯನ್ನು ಪ್ರಾರ್ಥಿಸಬೇಕು)

ದಂತಧಾವನ ಮಂತ್ರ
ಮುಖ ದುರ್ಗಂಧಿನಾಶಾಯ ದಂತಾನಾಂ ಚ ವಿಶುಧಯೇ| ಷ್ಠೀವನಾಯ ಚ ಗಾತ್ರಾಣಾಂ ಕರ್ವೇಹಂ ದಂತದಾವನಂ|| (೧೦೮ ಉತ್ತರಾಣಿ ಕಡ್ಡಿಗಳಿಂದಾ ಹಲ್ಲುಜ್ಜಬೇಕು.)

ಗೋಮಯಮಾದಾಯ
ಅಗ್ರೇಮಗ್ರಂ ಚರಂತೀನಾಮೋಂಷಧೀನಾಂ ವನೇವನೇ| ತಾಸಾ ಮೃಷಭಪತ್ನಿನಾಂ ಪವಿತ್ರಂ ಕಾಯಶೋಧನಂ| ತನ್ಮೇರೋಗಾಂಶ್ಚ ಶೋಕಾಂಶ್ಚನುದ ಗೋಮಯ ಸರ್ವದಾ|| (ಮೈಗೆ ಹಚ್ಚಿಕೂಂಡು ಸ್ನಾನ ಮಾಡಬೇಕು)

ಮೃತ್ತಿಕಾಮಾದಾಯ
ಅಶ್ವಕ್ರಾಂತೆ ರಥಕ್ರಾಂತೆ ವಿಷ್ಣುಕ್ರಾಂತೆ ವಸುಂಧರೇ | ಶಿರಸಾಧಾರಾಷ್ಯಾಮಿ ರಕ್ಷಸ್ವಮಾಂ ಪದೆ ಪದೆ|| (ಮೃತಿಕಾ,ಎಳ್ಳು,ನೆಲ್ಲಿ ಹಚ್ಚಿಕೂಂಡು ಸ್ನಾನ ಮಾಡಬೇಕು)

ಗಂಗಾ ಗಂಗೇತಿ ಯೋ ಭ್ರೂಯಾತ ಯೋಜನಾನಾಂ ಶತೈರಪಿ | ಮುಚ್ಚ್ಯತೆ ಸರ್ವ ಪಾಪೃಸ್ಚ ವಿಷ್ಣುಲೋಕಂ ಸ ಗಚ್ಚತಿ||

ಹೀಗೆ ಗಂಗೆಯನ್ನು ಪ್ರಾರ್ಥಿಸಿ ಗಂಧಾದಿಗಳಿಂದ ಪೂಜಿಸಿ ಅರ್ಘ್ಯವನ್ನು ಕೂಡಬೇಕು.

ಕಶ್ಯಪಾಯ ನಮ: ಇದಮರ್ಘ್ಯಂ ಸಮರ್ಪಯಾಮಿ.
ಅತ್ರಯೇ ನಮ: ಇದಮರ್ಘ್ಯಂ ಸಮರ್ಪಯಾಮಿ.
ವಿಶ್ವಾಮಿತ್ರಾಯನಮ: ಇದಮರ್ಘ್ಯಂ ಸಮರ್ಪಯಾಮಿ.
ಗೌತಮಾಯನಮ: ಇದಮರ್ಘ್ಯಂ ಸಮರ್ಪಯಾಮಿ.
ಜಮದಗ್ನಯೇ ನಮ : ಇದಮರ್ಘ್ಯಂ ಸಮರ್ಪಯಾಮಿ.
ವಶಿಷ್ಟಾಯ ನಮ: ಇದಮರ್ಘ್ಯಂ ಸಮರ್ಪಯಾಮಿ.
ಅರುಂಧತ್ತೈಯೇನಮಃ : ಇದಮರ್ಘ್ಯಂ ಸಮರ್ಪಯಾಮಿ.
ಎಲ್ಲಾ ವರ್ಣದ ಸ್ತ್ರೀಯರು ಪವಿತ್ರ ಜಲದಲ್ಲಿ ಮೇಲಿನ ವಿಧಿಯಿಂದ ಸ್ನಾನ ಮಾಡಿ ಮನೆಗೆ ಬರಬೇಕು.

ಗೋಮಯದಿಂದ ಸಾರಿಸಿ ರಂಗವಲ್ಲಿಯನ್ನು ಹಾಕಿ ಮಂಡಲ ಮಾಡಿ ಮಂಟಪವನ್ನು ತಯ್ಯಾರಿಸಬೇಕು. ತಾಮ್ರದ ಅಥವಾ ಮಣ್ಣಿನ ಕೂಡದಲ್ಲಿ ನೀರು ತುಂಬಿ ಕಲಶ ಸ್ಥಾಪನೆ ಮಾಡಬೇಕು. ಅದರಲ್ಲಿ ಸಪ್ತಋಷಿಗಳನ್ನು ಆವಾಹಿಸಿ, ವಸ್ತ್ರ, ಹಾರ, ಗಂಧ, ಪುಷ್ಪ, ಧೂಪ ದೀಪ, ನೈವೇದ್ಯ ಗಳೊಂದಿಗೆ ಷೋಡಶೋಪಚಾರಗಳಿಂದ ಪೂಜಿಸಬೇಕು.

ನಂತರ ಆಚಾರ್ಯರಿಗೆ ತಾಂಬೂಲ ವಸ್ತ್ರ ದಕ್ಷಿಣಾದಿಗಳೊಂದಿಗೆ ವಾಯನದಾನವನ್ನು ಕೊಡಬೇಕು. ಹಾಗು ವೃತಕತೆಯನ್ನು ಕೇಳಬೇಕು. ಅಂದು ಸ್ತ್ರೀಯರು ಉಪವಾಸವಿರಬೇಕು.
▬▬▬ஜ۩۞۩ஜ▬▬▬▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Related Posts