ದೇವರೆ ದೇವಸ್ಥಾನಕ್ಕೆ ಮಾಲೀಕರು. ದೇವಸ್ಥಾನಕ್ಕೆ ಮೀಸಲಾದ ಭೂಮಿಯ ಒಡೆತನ ದೇವರಿಗೆ ಸೇರಿದ್ದು, ಎಂಬ ಗೊಂದಲವನ್ನು ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಬಗೆಹರಿಸಿದೆ.

ದೇವಸ್ಥಾನಕ್ಕೆ ಮೀಸಲಾದ ಭೂಮಿಯ ಒಡೆತನ ಯಾರಿಗೆ ಸೇರಿದ್ದು ಎಂಬ ಗೊಂದಲವನ್ನು ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಬಗೆಹರಿಸಿದೆ. ದೇವಸ್ಥಾನದ ಅರ್ಚಕ ಯಾ ಪೂಜಾರಿಯು ದೇವಸ್ಥಾನದ ಸ್ವತ್ತಿನ ಒಡೆಯ ಅಲ್ಲ. ದೇವರೇ ನಿಜವಾದ ಮಾಲೀಕ ಎಂದು ಆದೇಶ ಹೊರಡಿಸಿದೆ.

ದೇವಸ್ಥಾನಗಳಿಗೆ ಮೀಸಲಾದ ಭೂದಾಖಲೆಗಳಲ್ಲಿ ಅರ್ಚಕರ ಹೆಸರನ್ನು ಸೇರಿಸುವುದಕ್ಕೆ ಉದ್ಭವಿಸಿರುವ ಗೊಂದಲ ಕುರಿತ ಪ್ರಕರಣದ ವಿಚಾರಣೆ ನಡೆಸಿದ ಹೇಮಂತ್ ಗುಪ್ತಾ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಪುರೋಹಿತರು, ಅರ್ಚಕರು ಅಥವಾ ಪೂಜೆ ಮಾಡುವ ಪೂಜಾರಿ ದೇವಸ್ಥಾನದ ಆಸ್ತಿಯ ನಿರ್ವಹಣೆಗಾಗಿ ಮಾತ್ರ ಭೂಮಿಯ ಮೇಲಿನ ತಾತ್ಕಾಲಿಕ ಒಡೆತನ ಹೊಂದಬಹುದಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕಲ್ಲಿನ ವಿಗ್ರಹವಾಗಿರುವ ಭಗವಂತನ ಹೆಸರಿನಲ್ಲಿ ಇರುವ ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯನ್ನು ಹೇಗೆ ನಿರ್ವಹಿಸುವುದು? ದೇವಸ್ಥಾನದ ನಿತ್ಯದ ಚಟುವಟಿಕೆಗಳು, ಬೆಳವಣಿಗೆಗಳನ್ನು ನಿಭಾಯಿಸುವವರು, ನೋಡಿಕೊಳ್ಳುವವರು ಯಾರು? ಪರಭಾರೆ ವ್ಯವಹಾರ ಹೇಗೆ ನಡೆಸುವುದು ಎಂಬ ಗೊಂದಲಗಳು ಉಂಟಾಗಿತ್ತು. ಈ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು.ಈ ಕುರಿತ ಗೊಂದಲ, ವಿವಾದಗಳಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಉತ್ತರ ನೀಡಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಸೊತ್ತಿನವಿಷಯದಲ್ಲಿ ಭೂದಾಖಲೆಗಳ ಮಾಲೀಕತ್ವದ ಕಾಲಂನಲ್ಲಿ ದೇವರ ಹೆಸರು ಮಾತ್ರ ಇರಬೇಕು. ದೇವರೇ ನಿರ್ದಿಷ್ಟ ಭೂಮಿಯ ನಿಜವಾದ ಮಾಲೀಕ. ಅಧಿಕೃತ ವಾರಿಸುದಾರರೂ ದೇವರೇ ಆಗಿರುತ್ತಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಭೂಮಿ ಬಳಸಿಕೊಂಡು ವೃತ್ತಿ

ಕೈಗೊಳ್ಳುವುದಾದರೆ ಅದು ಕೂಡ ದೇವರ

ಮಾಲೀಕತ್ವದ ಅಡಿಯಲ್ಲಿಯೇ ಇರಬೇಕು. ಆದರೆ

ವೃತ್ತಿ ನಿರ್ವಹಣೆಗೆ ಸೇವಕರನ್ನು ನೇಮಕ

ಮಾಡಿಕೊಳ್ಳಬಹುದಾಗಿದೆ. ಅಂತಹ ಸೇವಕರ

ಹೆಸರನ್ನು ಭೂ ದಾಖಲೆಗಳಲ್ಲಿ ನಮೂದಿಸುವಂತಿಲ್ಲ ಎಂದು ಅದೇದಿಸಿದೆ.

Related Posts